Wednesday, March 5, 2008

No comments:

pravachana

pravachana

ನರದೇಹದ ಕರ್ತವ್ಯ:-

ಆನಂದ ! ಆನಂದ !! ಆನಂದ !!! ಅಖಿಲ ಜೀವದ ಮುಲ ಸ್ವರೂಪವು ಆನಂದವೇ ಇರುತ್ತದೆ. ವಿಚಾರ ಮಾಡಿದರೆ ಈ ಮಾತಿನ ಅನುಭವವು ಈಗಲೇ ಬರುವಂತೆ ಅದೆ. ಚಿಚ್ಛಮತ್ಕಾರ ರೂಪವಾದ ಜಗದ್ಭ್ರಮೆಯ ಮತ್ತು ಜೀವನದ ಮೇಲೆ ಬಂದ ಮನಸ್ಸು,ಬುದ್ದಿ,ದೇಹ ಮುಂತಾದ ಹೊದಿಕೆ ಗಳ ತ್ಯಾಗ ಮಾಡಿ ತನ್ನಲ್ಲಿ ತಾನು ಲೀನವಾದರೆ ಆ ಸುಖದ ಅನುಭವವು ಬರುತ್ತದೆ. ಆ ಸ್ವರೋಪಾನಂದವನ್ನು ವರ್ಣಿಸಲಿಕ್ಕೆ ಶಬ್ದಗಳೆ ಸಿಗಲಾರವು!

ಅಷ್ಟೇಕೆ, ಅಜ್ಞಾನವಸ್ತೆಯಲ್ಲಿಯಾದರೂ ಜಿವನಿಗೆ ಕಾಮ-ಕ್ರೋಧ,ಸುಖ- ದುಃಖ ಮುಂತಾದ ವಿಕಾರಗಳು ಅನೇಕವಾಗಿ ಉಂಟಾಗುವವಷ್ಟೇ. ಈ ಸುಖ- ದುಃಖಾದಿಗಳು ಯಾವ ಪರಮ ಸುಖದಲ್ಲಿ ಐಕ್ಯ ವಾಗುವವೋ ಆ ಸುಖದಬಗ್ಗೆ ಏನೆಂದು ಹೇಳಬಹುದು? ಆ ಸ್ವರೋಪನಂದಾವು ಇರದಿದ್ದರೆ ಬಂದ ಕ್ರೋದವು ಎಲ್ಲಿ ಅಡಗುತ್ತಿತ್ತು? ಬಂದ ಸುಖ- ದುಃಖಾದಿಗಳು ಎಲ್ಲಿ ಲಯ ಹೊಂದು ತ್ತಿದ್ದವು? ಅದಿಲ್ಲದಿದ್ದರೆ ಬಂದ ಕಾಮ,ಕ್ರೋಧ,ಸುಖ, ದುಃಖಾದಿಗಳು ಎಂದೆಂದಿಗೂ ಉಳಿಯಬೇಕಾಗಿದ್ದಿತು ! ಅರ್ಥಾತ್ ಪರಮನಂದ ಸ್ವರೂಪ ಆತ್ಮನ ಅಸ್ತಿತ್ವವೂ ನಿರ್ವೀದವಾದವಾಗಿದೆ. ಇಂಥ ಸ್ವರೂಪಾನಂದವನ್ನು ಮರೆತು ಜೀವನು ಇರುವೆ,ತಗಣಿ,ನೊರಜು ಮುಂತಾದ 84 ಲಕ್ಷ್ಯಯೋನಿಗಳ ಯಾತ್ರೆಗಾಗಿ ಹೊರಟಿರುವನು ಮತ್ತು ದುಃಖಸಾಗರದಲ್ಲಿ ಹಾಯ್ ಹಾಯ್ ಮಾಡುತ್ತಾ ಮುಳಗಿ ಏಳುತ್ತಿರುವನು ! ಈ ಮಹಾ ದುಃಖದಿಂದ ಪಾರಗಬೇಕಾದರೆ ಆತ್ಮಜ್ಞಾನವೊಂದೇ ಉಪಾಯವಿರುವದು ಹಾಗೂ ಆತ್ಮಜ್ಞಾನವೂ ನರದೆಹಕ್ಕೆ ಮಾತ್ರ ಸಾದ್ಯವಿರುತ್ತದೆ.
ಜೀವನಿಗೆ ನರದೇಹವು ಬಹು ಕಷ್ಟದಿಂದ ದೊರಕುತ್ತದೆ. ಎತ್ತು,ಎಮ್ಮೆ,ಕುದುರೆ,ಗಿಡ ಮುಂತಾದ ಅನೇಕ ಯೋನಿ ಗಳಲ್ಲಿ ಮನುಷ್ಯನ ಸೇವೆ ಮಾಡಿದನಂತರ ಮನುಷ್ಯ ದೇಹ ವು ಪ್ರಾಪ್ತವಾಗುತ್ತದೆ. ಶ್ರೀರಾಮಾದಾಸರು ದಾಸಬೋಧದಲ್ಲಿ ಹೇಳಿದಂತೆ 'ಅನಂತ ಪುಣ್ಯದ ಫಲವೇ" ಈ ನರ ದೇಹ ವಿರುತ್ತದೆ.
ನರ ದೇಹಕ್ಕೆ ಬಂದು ಆತ್ಮಜ್ಞಾನ ಪಡೆದರೆ ಮೋಕ್ಷವಾಗುವುದು. ನರದೆಹಕ್ಕೆ ಮೋಕ್ಷವೂ ಸಾಧ್ಯವಿರುವದರಿಂದಲೇ ಎಲ್ಲ ಶಾಸ್ತ್ರಗಳು ಇದನ್ನು ಅನೇಕ ಪ್ರಕಾರವಾಗಿ ಕೊಂಡಾ ಡಿರುವವು! ನರ ದೇಹದ ಫಲರೋಪವಾದ ಮೋಕ್ಷವನ್ನು ದೊರಕಿಸಿದಿದ್ದರೆ ಮನುಷ್ಯನಿಗೊ ಪಶುಗಳಿ ಗೊ ಅಂತರವೇನು?
ಶ್ಲೋಕ:- ಆಹಾರ ನಿದ್ರಾಭಯ ಮೈಥುನಮ್ ಚ ಸಾಮನ್ಯಮೆತತ್ಪಶುಭಿರ್ನ ರಾಣಮ್ ಜ್ಞಾನಮ್ ಹಿ ತೆಷಾಮಧಿ ಕೋ ವಿಶೇಷೋ ಜ್ಞಾನೇನಾ ಹಿನಃಪಶುಭಿಃ ಸಮಾನಃ
ಭಾವಾರ್ಥ;- ಆಹಾರ-ನಿದ್ದೆ-ಭಯಕೋಟಗಳು ಪಶುಗಳಿ ಗೊ ಮನುಷ್ಯರಿ ಗೊ ಸಮಾನವೇ ಇರುವವು.ಅದರೆ ಮನುಷ್ಯರಿಗೆ ಜ್ಞಾನವೊಂದು ಹೆಚ್ಚಿನ ವಿಶೇಷಾವಿದ್ದು ಅಂಥ ಜ್ಞಾನರಹಿತರಾಗಿ ವರ್ತಿಸುವವರು ಪಶುಗಳೇಸೈ ! ನರ ದೇಹದಿಂದ ಜ್ಞಾನವನ್ನು ಪ್ರಾಪ್ತಿಮಾಡಿಕೊಂಡು ಮೋಕ್ಷ ಪಡೆದರೆ ನಾವು ಮನುಷ್ಯರೆನ್ನು ವದು ಸಿದ್ದವಾಗುವದು. ಇಲ್ಲದಿದ್ದರೆ ಅತಿ ಕಷ್ಟದಿಂದ ಸಂಪಾದಿಸಿದ ದುರ್ಲಭ ನರ ದೇಹವನ್ನು ವ್ಯರ್ಥ ಕಳಕೊಂಡಂತಾಗಿ 'ಪುನರಪಿ ಜನನಮ್ ಪುನರಪಿ ಮರಣ ಮ್ ಪುನರಪಿ ಜನನೀ ಜಠರೆ ಶಯನಂ ' ಎಂಬ 84 ಲಕ್ಸ್ಶ್ಯದ ಯಾತ್ರೆಯು ಪುನಃ ಪ್ರಾರಂಭವಾಗುವದು! ಈಗಲಾದರೂ ಈ ನರ ದೇಹ ವು 84 ಲಕ್ಷ್ಯಯೋನಿಗಳಲ್ಲಿಯ ದುಃಖವನ್ನು ಅನುಭವಿಸಿಯೇ ಸಿಕ್ಕಿರುವದು. ಇಷ್ಟು ಯಾತಾನೆಗಳನ್ನನುಭವಿಸಿ ದೊರಕಿ ದಂಟ್ ಥ ನರ ದೇಹದಿಂದ ಜ್ಞಾನರೂಪ ಫಲವನ್ನು ಹೊಂದಿರದೇ ಎಲ್ಲ ಜನ್ಮಗಳಲ್ಲಿ ಕಷ್ಟಪಟ್ಟದ್ದು ಸಾರ್ಥಕವು.

ಭೋಧ ವಚನಗಳು



1. ನಮ್ಮ ದ್ಯೇಯವು ಅತಿ ಉಚ್ಚವಿರಹತಕ್ಕದ್ದು.
2. ಮಿಂಚಿ ಹೋದಮಾತಿಗೆ ಚಿಂತಿಸಬೇಡಿರಿ; ಮತ್ತು ಮುಂದಿನ ಸುಖದ ಕಡೆಗೆ ಲಕ್ಶ್ಯಕೊಡಿರಿ.
3. ನಿಜಸುಖದ ಪ್ರಾಪ್ತಿಗಾಗಿ ಸತತ ಪ್ರಯತ್ನವಿರಲಿ.
4. ದೊಡ್ಡ ಮನಸ್ಸಿರಲಿ. ಯಾರಿಗೂ ನಿಂದೆ, ಮತ್ಸರ, ದ್ವೇಷ ಮಾಡದೇ ಎಲ್ಲರ ಕಲ್ಯಾಣವನ್ನು ಚಿಂತಿಸಿರಿ.
5. ಬ್ರಮ್ಹಚರ್ಯವನ್ನು ಪಾಲಿಸಿರಿ--'ರತನಕೋ ಜತನ ಕರೋ!'
6. ಆತ್ಮಜ್ಞಾನವನ್ನು ದೊರಕಿಸಿಕೊಂಡರೆ ನಿಮ್ಮ ಮತ್ತು ಜಗತ್ತಿನ ಕಲ್ಯಾಣವಾಗುವುದು.
7. ದೊರಕಿಸುವುದೆಲ್ಲವನ್ನು ಇದೇ ಕ್ಷಣಕ್ಕೆ ದೊರಕಿಸಿಕೊಳ್ಳಿರಿ, ಯಾಕೆಂದರೆ ಆಯುಷ್ಯವು ನಿಯಮದ್ದಲ್ಲ!!
8. ಬೇಕಾದಷ್ಟು ಪ್ರಯತ್ನ ಮಾಡಿರಿ, ಆದರೆ ನಿಮ್ಮ ಧ್ಯೇಯವನ್ನು ಸಾಧಿಸಲಿಕ್ಕೆ ಮರೆಯಬೆಡಿರಿ. ನಿಮ್ಮ ಕಲ್ಯಾಣದ ಮಾರ್ಗವು ನಿಮಗೆ ಹೊಳೆಯದಿದ್ದರೆ ಸದ್ಗುರು ಗಳಿಗೆ ಶರಣು ಹೋಗಿರಿ.

About Me

My photo
Hougang, singapore, Singapore